ವೇಸ್ಟ್‌ ಬಾಡೀಸ್

ಇದ್ದರು ಒಂದೇ ಇಲ್ಲದಿದ್ದರು ಒಂದೇ||

ಮುದಿ ತಂದೆ-ತಾಯಿ ಏಳಲು ಬಾರದೆ
ಹಾಸಿಗೆ ಹಿಡಿದು ನರಳಾಡುತಿರಲು
ಬಂದು ನೋಡದೆ ತಂದು ಉಣಿಸದೆ
ದೂರವಾದ ಈ ಮಕ್ಕಳೆಲ್ಲರು || ಇದ್ದರು ||

ಮಕ್ಕಳಿಲ್ಲವೆಂದನೇಕ ದೇವರ
ಹರಕೆ ಹೊತ್ತು ಪಡೆದವರಿಗೆ ಉಣಿಸಿ
ಬೆಳೆಸಿ ದೊಡ್ಡವರ ಮಾಡಿ ಓದಿಸಿ
ಬಾಳಿಗೆ ಮಾರ್ಗವ ಹಿಡಿಸಿ ದುಡಿದವರ
ಕಾಲಲ್ಲಿ ಒದ್ದು ಬಯ್ಯುವ ಸಂತಾನ

ಓದಲು ಕಲಿಸಲು ದಾರಿಯು ತಪ್ಪಿ
ಅಡ್ಡದಾರಿಗಳ ಹಿಡಿದು ಓಡುವ
ಕಳ್ಳರ ಸುಳ್ಳರ ಪುಂಡುತನದಲಿ
ಮನೆಗೂ ಊರಿಗೂ ಭಾರವಾದವರು

ಬದುಕಿನ ಬಂಡಿಯನೆಳೆದೂ ಎಳೆದು
ಕೀಲು ಕೀಲುಗಳು ಕಿರ್‌ರೆನುತಿರಲು
ಮಾಸಿದ ಬಟ್ಟೆಯ ಮಾಸಿದ ಮುಖಗಳ
ಹೇವರಿಸುತ ಕಡೆಗಣ್ಣಲಿ ನೋಡುವವರು

ದೇವರು ಜಾತಿಗಳನ್ನವ ಹಾಕವು
ಜನತೆ ಬದುಕುವುದು ದುಡಿಮೆಯನ್ನದಲಿ
ಕೋಮುವಾದದಲಿ ಜನಗಳ ಛಿದ್ರಿಸಿ
ದೇಶ ದೇಶಗಳ ಬೆಂಕಿ ಹಚ್ಚುವಾ

ದೇಶ ದ್ರೋಹಿಗಳು ಜನರ ದ್ರೋಹಿಗಳು
ಕಣ್ಣಲಿ ಕುಣಿಯುವ ಕನಸುಗಳಾಸೆಗೆ
ಮಣ್ಣಿನ ಸಿರಿಯನು ಕಾಲಲಿ ತುಳಿಯುವ
ಬೇರನು ಮರತೇ ಚಿಗುರು ಹೂಗಳಿಗೆ
ಜೋತಾಡುವ ಈ ಜೋಲ್ಬಾವಲಿಗಳು

ಕಷ್ಟ ನಷ್ಟ ಬಾಳುವೆಯ ದೂರುವ
ಬಾಳ ಸಾಗರದ ಬುರುಗು ಜೀವಿಗಳು
ದುಡಿವ ಕೈಗಳನು ಮರೆತ ದರಿದ್ರರು
ತಗಣಿ ಸೊಳ್ಳೆಗಳು ಕಿಲುಬು ಹುಳುಗಳು

ಬಿಸಿಲಿಗೆ ಬಾಡುವ ಜಳಕ್ಕೆ ಮುರುಟುವ
ಚಳಿಗೆ ಸೆಟೆದು ನಿರ್ಜೀವವಾಗುವ
ಗುಡ್ಡವನೇರದೆ ಕೆಳಕ್ಕೆ ಜಾರುವ
ಮೈಗಳ್ಳರು ಈ ಹೇಡಿ ಜೀವಿಗಳು

ಏಣಿಯ ಸೇರುತ ಮೇಲಕ್ಕೆ ಹತ್ತಿ
ಏಣಿಯ ಕಾಲಲ್ಲಿ ಒದೆಯುವ ಖೂಳರು
ತಿಳಿವಿನ ಹೊಳೆಯಲಿ ಹೊಲಸು ರಾಡಿಯ
ಕಲೆಸಿ ಮಲೆತು ವಿಷ ಬೀಜವಾದವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾವ
Next post ನಮ್ಮೂರ ಹುಡುಗ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys